ಕನ್ನಡ ವಾರ್ತೆಗಳು

ಬ್ರಹ್ಮಾವರ: ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿ ನಿಗೂಢ ನಾಪತ್ತೆ

Pinterest LinkedIn Tumblr

Bmvr_Studnt_Missing

ಉಡುಪಿ:   ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿನಿಯೋರ್ವಳು ಮನೆಗೆ ಬಾರದೇ ನಿಗೂಢವಾಗಿ ನಾಪತ್ತೆಯಾದ ಘಟನೆ ಬ್ರಹ್ಮಾವರದ ಬಾರ್ಕೂರಿನ ಹಾರಾಡಿ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಸೂರ್ಯನಾರಾಯಣ ಆಚಾರ್ಯ ಅವರ ಪುತ್ರಿ ರಾಧಿಕಾ (18)  ಕಾಣೆಯಾದ ಕಾಲೇಜು ವಿದ್ಯಾರ್ಥಿನಿ.

ಕಳೆದ ಮೂರು ದಿನದ ಹಿಂದೆ ಮನೆಯಿಂದ  ಕಾಲೇಜಿಗೆ ಹೋಗಿಬರುವುದಾಗಿ ತೆರಳಿದ್ದ ವಿದ್ಯಾರ್ಥಿನಿ ಸಂಜೆ ಮನೆಗೆ ಬಾರದೇ ಕಾಣೆಯಾಗಿದ್ದು ಮನೆಯವರು ಹಲವೆಡೆ ಹುಡುಕಾಟ ನಡೆಸಿದರೂ ಕೂಡ ಆಕೆ ಪತ್ತೆಯಾಗಿರಲಿಲ್ಲ.

ಈ  ಬಗ್ಗೆ ಆಕೆಯ ತಂದೆ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

 

 

Write A Comment