ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಇಂದಿನ ಅಧುನಿಕ ಶೈಲಿಯ ಪದ್ದತಿ ಮತ್ತು ಆಡಂಬರದ ಜೀವನ ಶೈಲಿಯ ಕ್ರಮಕ್ಕೆ ಮಾರು ಹೋಗಿ ನಮ್ಮ ಸಾಂಸ್ಕೃತಿಕ ಆಚರಣೆಗಳ ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಸಂತ ಅಲೋಸಿಯಸ್ ಕಾಲೇಜಿನ ಉಪನ್ಯಾಸಕ ಡಾ| ಗಣೇಶ್ ಅಮಿನ್ ಸಂಕಮಾರ್ ವಿಷಾದ ವ್ಯಕ್ತಪಡಿಸಿದರು.
ಅವರು ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ವತಿಯಿಂದ ಮಹಿಳಾ ಸಂಘಟನೆ ಹಾಗೂ ಯುವಜನ ಸಂಘಟನೆಯ ಅಶ್ರಯದೊಂದಿಗೆ ನಗರದ ಮಣ್ಣಗುಡ್ಡೆಯ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಹವಾನಿಯಂತ್ರಿತ ಸಮಾಜ ಭವನದಲ್ಲಿ ಬಾನುವಾರ ಸಂಜೆ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಆಟಿ ಆಚರಣೆ ಹಾಗೂ ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಯುವ ಜನಂಗಾ ಅಧುನಿಕ ಬದುಕಿಗೆ ಒಗ್ಗಿಕೊಳ್ಳುತ್ತಿರುವುದರಿಂದ, ಇಂದು ನಮ್ಮ ಹಿಂದಿನ ಕಾಲದ ಸಾಂಪ್ರದಾಯ ಪದ್ದತಿಗಳು ನಶಿಸಿ ಹೋಗುತ್ತಿದ್ದು, ಸಾಂಪ್ರದಾಯಿಕ ಆಚರಣೆಗಳು ವಿನಾಶದತ್ತ ಸಾಗುತ್ತಿದೆ. ಆದರೆ ಕೆಲವೊಂದು ಸಂಘ ಸಂಸ್ಥೆಗಳು ಈ ರೀತಿಯ ಕೆಲವು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುವ ಮೂಲಕ ನಮ್ಮ ಸಾಂಪ್ರದಾಯ ಪದ್ದತಿಗಳನ್ನು ನೆನಪು ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಎಸ್.ಯು.ಎಸ್ ಕಾಲೇಜಿನ ಪ್ರೊಪೆಸರ್ ಸುಂದರ್ ಮೊಯಿಲಿ, ಮಣಿಪಾಲ ಲಯನ್ಸ್ ಕ್ಲಬ್ ನ ಅಧ್ಯಕ್ಷ ಬಿ.ಜಿ.ಮೋಹನ್ ದಾಸ್, ಡೊಂಬಿವಿಲಿ ಘಟದ ಅಧ್ಯಕ್ಷ ರಾಮಚಂದ್ರ ದೇವಾಡಿಗ ಮುಂತಾದವರು ಅತಿಥಿಗಳಾಗಿದ್ದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ್ ಮರೋಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರತ್ನಾಕರ್ ದೇವಾಡಿಗ, ಪ್ರಧಾನ ಕಾರ್ಯದರ್ಶಿನ್ ಎಂ. ದೇವದಾಸ್, ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಗೀತಾ ವಿ ಕಲ್ಯಾಣ್ ಪುರ್, ಯುವ ಸಂಘಟನೆಯ ಅಧ್ಯಕ್ಷ ಯಂ.ಎಚ್.ಪ್ರಶಾಂತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಹಿಳಾ ಸಂಘಟನೆಯ ಮಾಜಿ ಅಧ್ಯಕ್ಷೆ ಶ್ರೀಮತಿ ವೇಣಿ ಮರೋಳಿಯವರ ಸಂಯೋಜನೆಯಲ್ಲಿ ಆಟಿ ತಿಂಗಳಲ್ಲಿ ಮಾಡುವಂತಹ ಅಹಾರ ಪದರ್ಥಗಳ ಸ್ಫರ್ಧೆಯನ್ನು ಆಯೋಜಿಸಲಾಗಿದ್ದು, ಇದರ ತೀಪುಗಾರರಾಗಿ ಕಂಕನಾಡಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಆಶಾ ಶೆಟ್ಟಿ ಹಾಗೂ ಮೂಲ್ಕಿ ಕಿಲ್ಮಾಡಿ ಪಂಚಾಯತ್ನ ಡೆವಲಪ್ ಅಫೀಸರ್ ಶೋಭಾ .ಎಚ್ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸದಸ್ಯರೇ ಮನೆಯಲ್ಲಿ ತಯಾರಿಸಿ ತಂದತಹ ನೂರಾರು ಬಗೆಯ ಆಟಿ ತಿಂಗಳಲ್ಲಿ ಹೆಚ್ಚಾಗಿ ಮಾಡುವಂತಹ ವಿಶೇಷ ಆಹಾರಗಳನ್ನು ಎಲ್ಲರೂ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀನಿವಾಸ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.