ಮಂಗಳೂರು,ಜುಲೈ.07 : ಮಣ್ಣಗುಡ್ಡೆಯ ಉತ್ಸಾಹಿ ತರುಣ ವೃಂದದ ಆಶ್ರಯದಲ್ಲಿ ಹಾಗೂ ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಮತ್ತು ಇಂಡಿಯನ್ ಇಮೂನೊಲಾಜಿಕಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಣ್ಣಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜುಲೈ12 ರಂದು(ಭಾನುವಾರ) ಬೆಳಿಗ್ಗೆ 10 ರಿಂದ12.30 ರವರೆಗೆ ಹುಚ್ಚುನಾಯಿ ನಿಯಂತ್ರಣ ಉಚಿತ ಲಸಿಕೆ ಶಿಬಿರ ಜರಗಲಿದೆ.
ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಈ ಶಿಬಿರಕ್ಕೆ ತಂದು ಉಚಿತ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ವಿನಂತಿಸಲಾಗಿದೆ.