ಕನ್ನಡ ವಾರ್ತೆಗಳು

ಬ್ರಹ್ಮಾವರ: ಅಸ್ಸಾಂ ಮೂಲದವನ ಕೊಲೆ| ಉದ್ಯೋಗ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr

5809murder_36

ಉಡುಪಿ: ಮಂದಾರ್ತಿ ಸಮೀಪ ಶಿರೂರು ಮುದ್ದುಮನೆಯಲ್ಲಿ ರವಿವಾರ ರಾತ್ರಿ ಅಸ್ಸಾಂ ಮೂಲದ ಯುವಕನ ಕೊಲೆ ನಡೆದಿದೆ.

ಅಸ್ಸಾಂ ಮೂಲದ ಮಹೇಂದ್ರರಾಜ ಬೋನ್ಸಿ (22) ಮೃತಪಟ್ಟವನು.

ಘಟನೆ ವಿವರ: ಅಸ್ಸಾಂ ಮೂಲದ ಏಳೆಂಟು ಮಂದಿ ಯುವಕರು ಮಂದಾರ್ತಿ ಹಾಗೂ ಶಿರೂರು ಮುದ್ದುಮನೆಯಲ್ಲಿ ದಿನಗೂಲಿ ಕೆಲಸದಲ್ಲಿ ತೊಡಗಿದ್ದರು. ರವಿವಾರ ಸಂಜೆಯಿಂದ ಮಂದಾರ್ತಿಯಲ್ಲಿದ್ದವರಿಗೂ, ಶಿರೂರು ಮುದ್ದುಮನೆಯಲ್ಲಿದ್ದವರಿಗೂ ಕೆಲಸದ ಅವಕಾಶದ ಬಗ್ಗೆ ದೂರವಾಣಿಯಲ್ಲಿ ವಾದವಿವಾದ ನಡೆದಿದೆ.

ಇದು ಮುಂದುವರಿದ ಪರಿಣಾಮ ಮಂದಾರ್ತಿಯಲ್ಲಿದ್ದ ಮಹೇಂದ್ರರಾಜ ಬೋನ್ಸಿ, ಮೃದುಲ್ ಸರೋನಿಯ, ಫೂಲನ್ ಬರ್ಮನ್, ಮಿಲನ್ ಬರ್ಮಲ್ ಅವರು ವಿಚಾರಿಸಲು ರಾತ್ರಿ ಶಿರೂರು ಮುದ್ದುಮನೆಗೆ ತೆರಳಿದ್ದಾರೆ. ಅಲ್ಲಿ ಪರಸ್ಪರ ಗಲಾಟೆ ನಡೆದು ಆರೋಪಿಗಳಾದ ನಯನ ದಾಸ್, ಸುಕ್ಲೇಶ್ವರ ಸರೋನಿಯ, ಜಯಂತ್ ದಾಸ್ ಅವರು ಮಹೇಂದ್ರರಾಜ ಬೋನ್ಸಿಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಕತ್ತಿಯಿಂದ ಬೆನ್ನಿಗೆ ಕಡಿದು, ಕತ್ತಿಯ ಹಿಂಬದಿಯಿಂದ ಹಣೆಗೆ ಹೊಡೆದಿದ್ದಾರೆ. ತೀವ್ರ ಗಾಯಗೊಂಡ ಮಹೇಂದ್ರರಾಜ ಮೃತಪಟ್ಟಿದ್ದಾರೆ.

ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment