ಕನ್ನಡ ವಾರ್ತೆಗಳು

ಸರ ಕದ್ದು ಪರಾರಿಯಾದ ಕಳ್ಳನ ಬಂಧನ

Pinterest LinkedIn Tumblr

chain_scher_photo

ಮಂಗಳೂರು,ಜುಲೈ.04: ಅಜಯ್ ಎಂಬವರು ರಾತ್ರಿ ಗಾಂಧಿಪಾರ್ಕ್ ಹಾಗೂ ಪುರಭವನದ ಮಧ್ಯದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರ ಕುತ್ತಿಗೆಗೆ ಕೈಹಾಕಿ 12 ಗ್ರಾಂ. ತೂಕದ 28,000 ರೂ.ಮೌಲ್ಯದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ ಆರೋಪಿ ಎಡ್ವಿನ್ ದಿನೇಶ್ ಕುಮಾರ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಆತನನ್ನು ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಬಳಿ ವಶಕ್ಕೆ ಪಡೆದ ಪೊಲೀಸರು ಆತನಿಂದ ಚಿನ್ನದ ಸರವನ್ನು ಸ್ವಾಧೀನ ಪಡಿಸಿಕೊಂಡರು. ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಸಿದು ಪರಾರಿಯಾಗುತ್ತಿರುವ ಘಟನೆಗಳು ಇದುವರೆಗೆ ವರದಿಯಾಗುತ್ತಿದ್ದರೆ ಇದೀಗ ದುಷ್ಕರ್ಮಿಗಳು ಪುರುಷರ ಕುತ್ತಿಗೆಯತ್ತಲೂ ದೃಷ್ಟಿ ಹಾಯಿಸತೊಡಗಿರುವ ಕುತೂಹಲಕಾರಿ ಮತ್ತು ಆತಂಕಕಾರಿ ಸಂಗತಿ ಇದರಿಂದ ಬೆಳಕಿಗೆ ಬಂದಿದೆ.

ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿದ್ದರು.

Write A Comment