ಮಂಗಳೂರು,ಜುಲೈ.01: ಯಕ್ಷಗಾನ ಅರ್ಥದಾರಿ, ವಿದ್ವಾಂಸ, ಲೇಖಕ, ಅಂಕಣಕಾರ ರಾಧಾಕೃಷ್ಣ ಕಲ್ಚಾರ್ ಅವರಿಗೆ ‘ಕಲ್ಕೂರ ಯಕ್ಷಸಿರಿ’ ಪುರಸ್ಕಾರ ನೀಡಿ ಗೌರವಿಸಲಾಯ್ತು. ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರಗಿದ ಸಮಾರಂಭದಲ್ಲಿ ಪಿಲಿಕುಲ ನಿಸರ್ಗಧಾಮದ ಸಿ.ಇ.ಒ. ಪ್ರಭಾಕರ್ ಶರ್ಮ ಪ್ರಶಸ್ತಿ ಪ್ರದಾನಗೈದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪಿ.ವಿ. ಪರಮೇಶ್, ವಿನಯಆಚಾರ್ಯ, ಜನಾರ್ದನ ಹಂದೆ, ಮಹಾಬಲ ಶೆಟ್ಟಿ, ಎಲ್ಲೂರು ರಾಮಚಂದ್ರ ಭಟ್, ವಿದುಷಿ ಗೀತಾ ಸರಳಾಯ ಮೊದಲಾದವರು ಉಪಸ್ಥಿತರಿದ್ದರು.