ಮಂಗಳೂರು, ಜೂನ್.24: ನಗರದ ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಹಿತಾ ಡಿ. ಎಸೆಸೆಲ್ಸಿ ಮರುವೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕಗಳನ್ನು ಗಳಿಸುವ ಮೂಲಕ ಒಟ್ಟು ಅಂಕಗಳನ್ನು 622ಕ್ಕೇರಿಸಿಕೊಂಡು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿ ಸಿದ ಹಿರಿಮೆಗೆ ಪಾತ್ರವಾಗಿದ್ದಾಳೆ.
ಮರು ವೌಲ್ಯಮಾಪನದಲ್ಲಿ ಪ್ರಥಮ ಭಾಷೆ ಕನ್ನಡ ಮತ್ತು ವಿಜ್ಞಾನದಲ್ಲಿ ತಲಾ 2 ಹೆಚ್ಚುವರಿ ಅಂಕಗಳು ಲಭಿಸಿವೆ. ಈಕೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ರಾಜ್ಕುಮಾರ್ ಭಟ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕಿ ಕೃಷ್ಣ ಪ್ರಭಾ ಅವರ ಪುತ್ರಿ.