ಉಡುಪಿ: ಮೀಸೆ ಮೂಡದ ಈ ಯುವಕನಿಗೆ ಹುಡುಗಿಯರನ್ನು ಸುತ್ತಾಡಿಸುವುದು, ಅವರೊಂದಿಗೆ ಕಾಲ ಕಳೆಯೋದು ಒಂಥರಾ ಚಟವಂತೆ. ಹೀಗೆ ಕಾರ್ಕಳ ಸಮೀಪದ ತೆಳ್ಳಾರು ಎಂಬಲ್ಲಿನ ಗುಡ್ಡ ಪ್ರದೇಶದಲ್ಲಿ ಇಬ್ಬರು ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯರ ಜೊತೆ ಅಶ್ಲೀಲವಾಗಿ ಕಾಲಕಳೆಯುತ್ತಿದ್ದ ಇವನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ.
ಇಲ್ಲಿಯೇ ತೆಳ್ಳಾರಿನ ನಿವಾಸಿಯಾದ ಸೌದಾತ್(20) ಎಂಬಾತನೇ ಸಾರ್ವಜನಿಕರಿಂದ ಥಳಿಸಿಕೊಂಡಾತ.
ಅದ್ಯೇಗೋ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈ ಸೌದಾತ್ ಊರಿನ ಈ ನಿರ್ಜನವಾದ ಗುಡ್ಡ ಪ್ರದೇಶಕ್ಕೆ ತನ್ನ ತೆಕ್ಕೆಗೆ ಬಿದ್ದ ಹೆಣ್ಮಕ್ಕಳನ್ನು ಕರೆತಂದು ಅವರೋಂದಿಗೆ ಚಕ್ಕಂದವಾಡುತ್ತಿದ್ದನಂತೆ. ಹಲವು ಬಾರೀ ಈ ಯುವಕನಿಗೆ ಸ್ಥಳಿಯರು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರಂತೆ. ಮೊನ್ನೆ ದಿನ ಇಬ್ಬರು ಶಾಲಾ ವಿದ್ಯಾರ್ಥಿನಿಯರ ಜೊತೆ ತೆಳ್ಳಾರು ಸಮೀಪದ ಗುಡ್ಡಕ್ಕೆ ಈತ ತೆರಳಿದ್ದನ್ನು ಕಂಡು ಸ್ಥಳೀಯರು ಇಡೀ ಗುಡ್ಡವನು ಹುಡುಕಿ ವಿದ್ಯಾರ್ಥಿನಿಯರೊಂದಿಗಿದ್ದ ಸೌದತನನ್ನು ಹಿಡಿದಿದ್ದಾರೆ. ಅಲ್ಲದೇ ಆತನಿಗೆ ತಪರಾಕಿಯನ್ನು ನೀಡಿದ್ದಾರೆ.
ಹೀಗೆ ಯುವಕನಿಗೆ ಸರಿಯಾಗಿ ಗೂಸಾ ನೀಡಿದ ಸಾರ್ವಜನಿಕರು ವಿದ್ಯಾರ್ಥಿನಿಯರಿಬ್ಬರಿಗೆ ಬುದ್ದಿ ಹೇಳಿ ಅವರ ಮನೆಯವರಿಗೆ ವಿಚಾರ ತಿಳಿಸಿ ಮನೆಗೆ ಕಳಿಸಿಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವ ದೂರು ದಾಖಲಾಗಿಲ್ಲ.