ಮಂಗಳೂರು : ಬಿಜೆಪಿ ಸದಸ್ಯತ್ವ ಅಭಿಯಾನದ ಎರಡನೇ ಹಂತವಾಗಿ ಜಿಲ್ಲಾ ಮಟ್ಟದ ಮಹಾ ಸಂಪರ್ಕ ಅಭಿಯಾನಕ್ಕೆ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುದವಾರ ಬೆಳಿಗ್ಗೆ ಸಂಸದ ನಳಿನ್ಕುಮಾರ್ ಕಟೀಲು ಅವರು ಚಾಲನೆ ನೀಡಿದರು.
ಮೊದಲಿಗೆ ಕದ್ರಿ ಶಿವಾಭಾಗ್ನಲ್ಲಿರುವ ಉದ್ಯಮಿ ಧೀರಜ್ ಅಮೀನ್ ಅವರ ಮನೆಗೆ ಭೇಟಿ ನೀಡಿದ ಸಂಸದ ನಳಿನ್ಕುಮಾರ್ ಕಟೀಲು ಹಾಗೂ ಬಿಜೆಪಿ ಮುಖಂಡರು ಧೀರಜ್ ಅಮೀನ್ ಅವರಿಗೆ ಬಿಜೆಪಿ ಸದಸ್ಯತ್ವದ ಅರ್ಜಿ ಫಾರಂ ನೀಡಿದರು.ಧೀರಜ್ ಅಮೀನ್ ಅವರು ಈ ಫಾರಂ ಭರ್ತಿ ಮಾಡುವ ಮೂಲಕ ಪಕ್ಷದ ಅಧಿಕೃತ ಸದಸ್ಯರಾದರು.
ಬಳಿಕ ನಂತೂರು ಸಮೀಪದ ಈಡನ್ ಕ್ಲಬ್ ಬಳಿಯಿರುವ ಕ್ರೆಡೈ ಸಂಸ್ಥೆಯ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ಮುಖಂಡರು ಅವರಿಗೂ ಬಿಜೆಪಿ ಸದಸ್ಯತ್ವದ ಅರ್ಜಿ ಫಾರಂ ನೀಡಿದರು. ಅರ್ಜಿ ಫಾರಂ ತುಂಬಿಸಿ ಪಕ್ಷದ ಸದಸ್ಯರಾದ ಪುಷ್ಪರಾಜ್ ಜೈನ್ ಅವರು ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ತಮ್ಮ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಮಹಾ ಸಂಪರ್ಕ ಅಭಿಯಾನದ ಉಸ್ತುವಾರಿ ಮೋನಪ್ಪ ಭಂಡಾರಿ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಪಕ್ಷದ ಪ್ರಮುಖರಾದ ಸುಲೋಚನ ಭಟ್, ನಾಗರಾಜ್ ಶೆಟ್ಟಿ, ರವಿಶಂಕರ್ ಮಿಜಾರ್, ಗೋಪಾಲ್ ಕೃಷ್ಣ, ಸುದರ್ಶನ್, ಸುಧೀರ್ ಶೆಟ್ಟಿ ಕಣ್ಣೂರು, ಸುರೇಶ್ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಹೆಚ್ಚಿನ ವಿವರ ನಿರೀಕ್ಷಿಸಿ..