ಕನ್ನಡ ವಾರ್ತೆಗಳು

ಕೆದೂರಿನಲ್ಲಿ ಟಾಟಾ ಏಸ್ ವಾಹನ ಸುಟ್ಟು ಭಸ್ಮ..!

Pinterest LinkedIn Tumblr

 ಕುಂದಾಪುರ: ಒಣ ಹುಲ್ಲು ಸಾಗಿಸುತ್ತಿದ ಟಾಟಾ ಏಸ್ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಟಾಟಾ ಏಸ್ ವಾಹನ ಬೆಂಕಿ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟು ಕರಕಲಾದ ಘಟನೆ ಗುರುವಾರ ಸಂಜೆ ಸುಮಾರಿಗೆ ತೆಕ್ಕಟ್ಟೆ ಸಮೀಪದ ಕೆದೂರಿನ ಮೂಡು ಕೆದೂರು ಜಟ್ಟಿಗೇಶ್ವರ ದೇವಸ್ಥಾನದ ಸಮೀಪ ನಡೆದಿದೆ.

ಸ್ಥಳೀಯ ನಿವಾಸಿ ವಿಜಯ ಶೆಟ್ಟಿ ಎನ್ನುವವರಿಗೆ ಸೇರಿದ ಟಾಟಾ ಏಸ್ ಗೂಡ್ಸ್ ವಾಹನ ಇದಾಗಿದೆ.

Keduru_Ace_Problem (6) Keduru_Ace_Problem (9) Keduru_Ace_Problem (8) Keduru_Ace_Problem (7) Keduru_Ace_Problem (5) Keduru_Ace_Problem (4) Keduru_Ace_Problem (3) Keduru_Ace_Problem (2) Keduru_Ace_Problem Keduru_Ace_Problem (1)

ಗುರುವಾರ ಮಧ್ಯಾಹ್ನ ಸುಮಾರಿಗೆ ಒಣಹುಲ್ಲನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಈ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂದಿದೆ. ನೋಡನೋಡುತ್ತಿದ್ದಂತೆಯೇ ಬೆಂಕಿಯ ತೀವ್ರತೆ ಜಾಸ್ಥಿಗೊಂಡಿದ್ದು, ಕುಂದಾಪುರ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಆದರೇ ಅಗ್ನಿಶಾಮಕ ವಾಹನ ಬರುವಷ್ಟರಾಗಲೇ ಬೆಂಕಿ ಹತ್ತಿ ಉರಿಯುತ್ತಿತ್ತು.

ಬೆಂಕಿ ಅನಾಹುತದಿಂದ ಸಂಪೂರ್ಣ ವಾಹನ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

ಬೆಂಕಿ ಅನಾಹುತಕ್ಕೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

Write A Comment