ಮಂಗಳೂರು: ದ.ಕ.ಜಿಲ್ಲಾ ಬಿಜೆಪಿಯ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಉರ್ವಾಸ್ಟೋರಿನ ಮೈದಾನದ ಹತ್ತಿರ ಸದಸ್ಯತ್ವ ಅಭಿಯಾನ ಇಂದು ನಡೆಯಿತು. ಉರ್ವಾಸ್ಟೋರಿನಲ್ಲಿ ಸತತ ಎರಡನೇ ಆದಿತ್ಯವಾರದಂದು ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಸುಮಾರು 500 ಜನರಿಗಿಂತಲೂ ಮಿಕ್ಕಿ ಸದಸ್ಯತ್ವ ನೊಂದಾವಣೆ ನಡೆಯಿತು.
ಸದಸ್ಯತ್ವ ನೊಂದಾವಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರಾಜಗೋಪಾಲ ರೈ ಮಂಗಳೂರು ನಗರ ಕಾರ್ಯದರ್ಶಿ ಗುರುಪ್ರಸಾದ್ ರಾವ್ ಪಕ್ಷದ ಪ್ರಮುಖರಾದ ಶ್ರೀಮತಿ ರಾಮೇಶ್ವರಿ ಶೆಟ್ಟಿ, ಸುಧಾಕರ ಆಳ್ವ, ಕೃಷ್ಣಣ್ಣ, ಮೋಹನ್ ಶೆಟ್ಟಿ, ರಾಘವ, ಲಕ್ಷ್ಮಣ, ಶಿವಕುಮಾರ್, ಪದ್ಮನಾಭ, ನಾಗೇಶ್ ಶೆಟ್ಟಿ, ಸಂದೀಪ್ , ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.