ಕನ್ನಡ ವಾರ್ತೆಗಳು

ವಿಶ್ವ ತುಳುವೆರೆ ಪರ್ಬ ಸಮಾರೋಪ | ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆಯೊಂದಿಗೆ ತುಳು ಭೂಮಿಯನ್ನು ರಕ್ಷಿಸಿ ಉಳಿಸಲು ಸಾಂಘಿಕ ಪ್ರಯತ್ನ ಅಗತ್ಯ : ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

Pinterest LinkedIn Tumblr

Vishwa_TuluParba_End_1

ವಿಶೇಷ ಚಿತ್ರಗಳು : ಸತೀಶ್ ಕಾಪಿಕಾಡ್

ಮಂಗಳೂರು (ಅಡ್ಯಾರ್, ಸಹ್ಯಾದ್ರಿ ಕಾಲೇಜು ಆವರಣ, ಎಸ್.ಆರ್.ಹೆಗ್ಡೆ ವೇದಿಕೆ) : ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ನೆಲ ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ನಾವೆಲ್ಲರೂ ಸಾಂಘಿಕ, ಸಕ್ರಿಯ ಪ್ರಯತ್ನ ನಡೆಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಅಡ್ಯಾರು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ಮೂರು ದಿನಗಳ ವಿಶ್ವ ತುಳುವೆರೆ ಪರ್ಬದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

Vishwa_TuluParba_End_2

ತುಳು ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ತುಳು ಭೂಮಿಯನ್ನು ರಕ್ಷಿಸಿ ಉಳಿಸುವ ಅಗತ್ಯ ಇದೆ. ತುಳು ಭಾಷೆ ಉಳಿಸದಿದ್ದರೆ, ತುಳು ಸಂಸ್ಕೃತಿಯು ಉಳಿಯುವುದಿಲ್ಲ. ತುಳು ಸಂಸ್ಕೃತಿ ಉಳಿವಿಗಾಗಿ ತುಳು ಭಾಷೆ ಉಳಿಸಿ ಬೆಳೆಸಬೇಕು ಎಂದು ಸ್ವಾಮೀಜಿ ಹೇಳಿದರು.

ಹಾಲು-ಲೋಟ: ಹಾಲು ಕುಡಿಯಬೇಕಾದರೆ, ಅದಕ್ಕೊಂದು ಲೋಟ ಬೇಕು. ಹಾಗೆಯೇ ತುಳು ಭಾಷೆ ಹಾಲು ಆದರೆ ಅದನ್ನು ಕುಡಿಯುವ ಲೋಟ ನಮ್ಮ ಸಂಸ್ಕೃತಿ. ಹಾಗೆ ತುಳು ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಮಿಲಿತವಾಗಿದೆ. ಮಧ್ವಾಚಾರ್ಯರ ಕೃತಿಗಳೆಲ್ಲವೂ ತುಳು ಲಿಪಿಯಲ್ಲಿದೆ ಎಂಬುವುದನ್ನು ಉಲ್ಲೇಖಿಸಿದ ಸ್ವಾಮೀಜಿ, ಈ ಭಾಷೆ ಸಂಸ್ಕೃತಿ ಎಷ್ಟು ಪುರಾತನವಾದುದು ಎಂದು ಅವರು ವಿವರಿಸಿದರು.

Vishwa_TuluParba_End_3

ಪ್ರಕೃತಿಯಲ್ಲಿ ದೇವರು: ದೇವರು ದೇವಸ್ಥಾನದಲ್ಲಿ ಮಾತ್ರ ಇರುವುದಲ್ಲ. ಮರ, ಗಿಡ, ಗುಡ್ಡಗಳಿರುವ ಪ್ರಕೃತಿಯಲ್ಲಿ ದೇವರನ್ನು ಕಾಣಲು ಸಾಧ್ಯ. ಈ ಹಿನ್ನೆಲೆಯಿಂದ ಪ್ರಕೃತಿಯನ್ನು ದೇವರಂತೆ ಕಾಣಬೇಕು. ಪ್ರಕೃತಿಗೆ ಪೂಜೆ ಮಾಡಬೇಕು. ಇಲ್ಲಿಗೆ ಉದ್ಯಮಗಳು ಬರುವಾಗ ಇಲ್ಲಿನ ನೆಲ, ಕೃಷಿ, ನದಿಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.

Vishwa_TuluParba_End_4 Vishwa_TuluParba_End_5 Vishwa_TuluParba_End_6 Vishwa_TuluParba_End_7 Vishwa_TuluParba_End_8 Vishwa_TuluParba_End_9 Vishwa_TuluParba_End_10 Vishwa_TuluParba_End_11 Vishwa_TuluParba_End_12 Vishwa_TuluParba_End_13 Vishwa_TuluParba_End_14 Vishwa_TuluParba_End_15 Vishwa_TuluParba_End_16 Vishwa_TuluParba_End_17 Vishwa_TuluParba_End_18 Vishwa_TuluParba_End_19 Vishwa_TuluParba_End_20 Vishwa_TuluParba_End_21 Vishwa_TuluParba_End_22 Vishwa_TuluParba_End_23 Vishwa_TuluParba_End_24 Vishwa_TuluParba_End_25 Vishwa_TuluParba_End_26 Vishwa_TuluParba_End_27 Vishwa_TuluParba_End_28 Vishwa_TuluParba_End_29

ಎತ್ತಿನ ಹೊಳೆ..!

ಎತ್ತಿನಹೊಳೆ ಯೋಜನೆಯ ಸ್ಪಷ್ಟತೆ ಇಲ್ಲ. ಯೋಜನೆ ಮಾಡಿ ಇಲ್ಲಿಯವರಿಗೂ ನೀರಿಲ್ಲ, ಅಲ್ಲಿಯವರಿಗೂ ನೀರಿಲ್ಲವಾದರೆ ಏನು ಪ್ರಯೋಜನ ಎಂದು ಸ್ವಾಮೀಜಿ ಪ್ರಶ್ನಿಸಿದರು. ತುಳು ಭಾಷೆಯೊಂದಿಗೆ ಇತರ ಸೋದರ ಭಾಷೆಗಳಾದ ಕನ್ನಡ, ಕೊಂಕಣಿ, ಬ್ಯಾರಿ, ಉರ್ದು ಹೀಗೆ ಎಲ್ಲಾ ಭಾಷೆಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂದರು.

ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್, ಮುಂಬಯಿ ಬಂಟರ ಸಂಘದ ಮುಖ್ಯಸ್ಥ ಕರ್ನಿರೆ ವಿಶ್ವನಾಥ ಶೆಟ್ಟಿ, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್, ಉದ್ಯಮಿ ಕರುಣಾಕರ ಶೆಟ್ಟಿ, ಶಂಕರ ಶೆಟ್ಟಿ ಗೌರವ ಅತಿಥಿಗಳಾಗಿದ್ದರು.

ವಿಶೇಷ ಅತಿಥಿಗಳಾಗಿ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಗಾಯಕ ಹರೀಶ್ ಶೇರಿಗಾರ್ ದುಬೈ, ಸರ್ವೋತ್ತಮ ಶೆಟ್ಟಿ ದುಬೈ, ಸುಧಾಕರ ಆಳ್ವ ದುಬೈ,  ಕೆ.ಡಿ. ಶೆಟ್ಟಿ ಮುಂಬಯಿ, , ನಾರಾಯಣ ಎಂ ದೇವಾಡಿಗ, ಡಾ. ಸುನೀತಾ ಎಂ. ಶೆಟ್ಟಿ ಮುಂಬಯಿ ಭಾಗವಹಿಸಿದ್ದರು.

Vishwa_TuluParba_End_30 Vishwa_TuluParba_End_31 Vishwa_TuluParba_End_32 Vishwa_TuluParba_End_33 Vishwa_TuluParba_End_34 Vishwa_TuluParba_End_35 Vishwa_TuluParba_End_36 Vishwa_TuluParba_End_37 Vishwa_TuluParba_End_38 Vishwa_TuluParba_End_39 Vishwa_TuluParba_End_40 Vishwa_TuluParba_End_41 Vishwa_TuluParba_End_42 Vishwa_TuluParba_End_43 Vishwa_TuluParba_End_44 Vishwa_TuluParba_End_45 Vishwa_TuluParba_End_46 Vishwa_TuluParba_End_47 Vishwa_TuluParba_End_48

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ವಿಶ್ವ ತುಳುವರೆ ಪರ್ಬ ಸಂಚಾಲಕ ಎ.ಸಿ. ಭಂಡಾರಿ, ಪದಾಧಿಕಾರಿಗಳಾದ ನಿಟ್ಟೆ ಶಶಿಧರ ಶೆಟ್ಟಿ, ಕರುಣಾಕರ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮಹಾಬಲ ಶೆಟ್ಟಿ ಅಡ್ಯಾರ್, ಚಂದ್ರಹಾಸ ರೈ , ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಉಪಸ್ಥಿತರಿದ್ದರು.

ಸನ್ಮಾನ: ಇದೇ ಸಂದರ್ಭ ಹೊರ ಪ್ರದೇಶದಿಂದ ಆಗಮಿಸಿದ ಗಣ್ಯರಾದ ಡಾ. ಸುರೇಂದ್ರ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಪ್ರೇಮನಾಥ ಶೆಟ್ಟಿ ಯುಎಇ, ಕೃಷ್ಣರಾಜ ತಂತ್ರಿ ದುಬೈ, ಜಯಂತ ಶೆಟ್ಟಿ ಯುಎಇ, ನಾರಾಯಣ ದೇವಾಡಿಗ, ಕರುಣಾಕರ ಶೆಟ್ಟಿ ಹಾಗೂ ವಿಜಯನಾಥ ವಿಠಲ ಶೆಟ್ಟಿಅವರನ್ನು ಡಾ. ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು.

ಸಮಾರಂಭದಲ್ಲಿ ಹರೀಶ್ ಸೇರಿಗಾರ್ ಅವರು ಜನಪ್ರಿಯ ತುಳು ಹಾಡೊಂದನ್ನು ಹಾಡುವ ಮೂಲಕ ನೆರೆದ ಪ್ರೇಕ್ಷಕರ ಮನರಂಜಿಸಿದರು. ಈಗಾಗಲೇ ದೇಶವಿದೇಶಗಳಲ್ಲಿ ನಡೆದಂತಹ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಅಧ್ಬುತ ಕಂಠಸಿರಿಯ ಮೂಲಕ ಪ್ರಸಿದ್ದಿ ಪಡೆದಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಸೇರಿಗಾರ್ ಅವರು ಕೊಡುಗೈ ದಾನಿಯಾಗಿಯೂ ಖ್ಯಾತರಾಗಿದ್ದರೆ. ಕನ್ನಡ, ಹಿಂದಿ, ತಮಿಳು,ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿರುವ ಹರೀಶ್ ಸೇರಿಗಾರ್ ಅವರು ಅಡ್ಯಾರ್ ನಲ್ಲಿ ನಡೆಯುತ್ತಿರುವ ವಿಶ್ವ ತುಳು ಪರ್ಬದ ಹಿನ್ನೆಲೆಯಲ್ಲಿ ತುಳು ಹಾಡನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.

Vishwa_TuluParba_End_51 Vishwa_TuluParba_End_52 Vishwa_TuluParba_End_53 Vishwa_TuluParba_End_54 Vishwa_TuluParba_End_55 Vishwa_TuluParba_End_56 Vishwa_TuluParba_End_57 Vishwa_TuluParba_End_58 Vishwa_TuluParba_End_59 Vishwa_TuluParba_End_60

ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಅಭಿವೃದ್ಧಿಯ ನೆರೆಯಲ್ಲಿ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಕೊಚ್ಚಿ ಹೋಗದಿರಲಿ: ಡಾ. ಹೆಗ್ಗಡೆ

ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳು ಅಭಿವೃದ್ಧಿಯ ನೆರೆಯಲ್ಲಿ ಕೊಚ್ಚಿಹೋಗಬಾರದು. ಇದನ್ನು ಉಳಿಸುವ ಅನಿವಾರ್ಯತೆ ನಮಗಿದೆ. ಈ ಹಿನ್ನೆಲೆಯಿಂದ ವಿಶ್ವ ತುಳುವರೆ ಪರ್ಬದಂತಹ ಕಾರ್ಯಕ್ರಮಗಳು ದೊಡ್ಡ ಹೆಜ್ಜೆಯಾಗಿವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Vishwa_TuluParba_End_61 Vishwa_TuluParba_End_62 Vishwa_TuluParba_End_63 Vishwa_TuluParba_End_64 Vishwa_TuluParba_End_65 Vishwa_TuluParba_End_66 Vishwa_TuluParba_End_67 Vishwa_TuluParba_End_68 Vishwa_TuluParba_End_69 Vishwa_TuluParba_End_70 Vishwa_TuluParba_End_71 Vishwa_TuluParba_End_72 Vishwa_TuluParba_End_73 Vishwa_TuluParba_End_74 Vishwa_TuluParba_End_75 Vishwa_TuluParba_End_76 Vishwa_TuluParba_End_77 Vishwa_TuluParba_End_78 Vishwa_TuluParba_End_79 Vishwa_TuluParba_End_80

ತುಳುವರ ಕೊಡುಗೆ ಅಪಾರ: ಕನ್ನಡ ಭಾಷೆಗೆ ತುಳುವರ ಕೊಡುಗೆ ಅಪಾರವಾದುದು. ರತ್ನಾಕರ ವರ್ಣಿ, ಮುದ್ದಣ, ಡಾ. ಶಿವರಾಮ ಕಾರಂತ ಹೀಗೆ ತುಳುವಿನ ಸಾಹಿತಿಗಳು, ಕವಿಗಳು ತುಳು-ಕನ್ನಡಕ್ಕೆ ನೀಡಿದ ಸೇವೆ ಅಮೋಘವಾದುದು. ಇದನ್ನು ಮುಖ್ಯಮಂತ್ರಿಗೆ ಹೇಳಬೇಕೆಂಬ ಬಯಕೆ ನನ್ನಲ್ಲಿತ್ತು. ನೇತ್ರಾವತಿ ನೀರನ್ನು ಉಳಿಸುವ, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ, ಜಾನಪದ ಕಂಬಳ, ಯಕ್ಷಗಾನ ಕಲೆಯನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕು ಎಂದರು.

Vishwa_TuluParba_End_81 Vishwa_TuluParba_End_82 Vishwa_TuluParba_End_83 Vishwa_TuluParba_End_84 Vishwa_TuluParba_End_85 Vishwa_TuluParba_End_86 Vishwa_TuluParba_End_87 Vishwa_TuluParba_End_88 Vishwa_TuluParba_End_90 Vishwa_TuluParba_End_91 Vishwa_TuluParba_End_92 Vishwa_TuluParba_End_93 Vishwa_TuluParba_End_94 Vishwa_TuluParba_End_96 Vishwa_TuluParba_End_97 Vishwa_TuluParba_End_98 Vishwa_TuluParba_End_99 Vishwa_TuluParba_End_100 Vishwa_TuluParba_End_101 Vishwa_TuluParba_End_102 Vishwa_TuluParba_End_103 Vishwa_TuluParba_End_104 Vishwa_TuluParba_End_105 Vishwa_TuluParba_End_106 Vishwa_TuluParba_End_107 Vishwa_TuluParba_End_108 Vishwa_TuluParba_End_109 Vishwa_TuluParba_End_110 Vishwa_TuluParba_End_95a Vishwa_TuluParba_End_89a

ತುಳು ಸಿನಿಮಾಗಳ ಸ್ಪರ್ಧೆ ಬೇಡ: ತುಳು ಸಿನೆಮಾಗಳು ಸಾಕಷ್ಟು ಬರುತ್ತಿವೆ. ಆದರೆ ತುಳು ಸಿನೆಮಾಗಳ ನಡುವೆ ಸ್ಪರ್ಧೆ ಬೇಡ. ಹಠಕ್ಕೆ ಬಿದ್ದು ಸಿನೆಮಾ ಮಾಡುವ ಬದಲು ಒಬ್ಬರ ನಂತರ ಮತ್ತೊಬ್ಬರಂತೆ ಚಿತ್ರ ಮಾಡಿದರೆ, ಮತ್ತೆ ಸಿನೆಮಾ ಮಾಡುವ ಉತ್ಸಾಹ ಮೂಡುತ್ತದೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

Vishwa_TuluParba_End_111 Vishwa_TuluParba_End_112 Vishwa_TuluParba_End_115 Vishwa_TuluParba_End_119 Vishwa_TuluParba_End_120 Vishwa_TuluParba_End_121 Vishwa_TuluParba_End_122 Vishwa_TuluParba_End_123 Vishwa_TuluParba_End_124 Vishwa_TuluParba_End_125 Vishwa_TuluParba_End_126 Vishwa_TuluParba_End_128 Vishwa_TuluParba_End_129 Vishwa_TuluParba_End_130 Vishwa_TuluParba_End_131 Vishwa_TuluParba_End_132 Vishwa_TuluParba_End_133 Vishwa_TuluParba_End_134 Vishwa_TuluParba_End_135 Vishwa_TuluParba_End_136 Vishwa_TuluParba_End_137 Vishwa_TuluParba_End_138 Vishwa_TuluParba_End_139 Vishwa_TuluParba_End_140 Vishwa_TuluParba_End_141 Vishwa_TuluParba_End_142 Vishwa_TuluParba_End_143 Vishwa_TuluParba_End_113a Vishwa_TuluParba_End_114a Vishwa_TuluParba_End_116a Vishwa_TuluParba_End_117a Vishwa_TuluParba_End_118a

ಪ್ರಮುಖ ನಿರ್ಣಯ  ಮಂಡನೆ :

ವಿಶ್ವ ತುಳುವರೆ ಪರ್ಬದಲ್ಲಿ ಕೈಗೊಂಡ 6 ಪ್ರಮುಖ ನಿರ್ಣಯಗಳನ್ನು ಎ.ಸಿ. ಭಂಡಾರಿ ಮಂಡಿಸಿದರು. ಈ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಅರ್ಪಿಸಿ, ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ತುಳು ಭಾಷೆಯನ್ನು ಶೀಘ್ರದಲ್ಲಿ 8ನೆ ಪರಿಚ್ಛೇದಕ್ಕೆ ಸೇರಿಸುವಲ್ಲಿ ಮುಖ್ಯ ಕಾರ್ಯದರ್ಶಿಯನ್ನು ಒಳಗೊಂಡ ಉಚ್ಛಸ್ಥರದ ಸಮಿತಿಯನ್ನು ಕೂಡಲೇ ರಚಿಸುವಂತೆ ಕ್ರಮ ಕೈಗೊಳ್ಳಬೇಕು. / ಎತ್ತಿನಹೊಳೆ (ನೇತ್ರಾವತಿ) ನದಿ ತಿರುವ ಯೋಜನೆ ಕೈಬಿಡಬೇಕು.      / ಪರಿಷ್ಕೃತ ಕಂಬಳವನ್ನು ನಡೆಸುವರೇ ಅನುಮತಿ ನೀಡಬೇಕು. / ದ. ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. / ದ. ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೃಷಿಯನ್ನು ಸಮರ್ಪಕ ಅಭಿವೃದ್ಧಿಗೊಳ್ಳುವ ದೃಷ್ಠಿಯಲ್ಲಿ ಮಾರಕ ಯೋಜನೆಗಳನ್ನು ಕೈಬಿಡಬೇಕು. /ಮಂಗಳೂರು ವಿಮಾನ ನಿಲ್ದಾಣವನ್ನು ತುಳುನಾಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಬೇಕು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆಗಳನ್ನು ತುಳು ಭಾಷೆಯಲ್ಲಿ ನೀಡುವಂತೆ ಆದೇಶ ಹೊರಡಿಸಬೇಕು.

Write A Comment