ಮಂಗಳೂರು,ಡಿ.04 : ತುಳುನಾಡು ಛಾಯಾಚಿತ್ರ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸಿ ಕೊಡಲು ಡಿಸೆಂಬರ್ ತಿಂಗಳ 8 ನೇ ತಾರೀಕಿನ ತನಕ ಅವಕಾಶವಿದೆ ಎಂದು ತುಳುನಾಡು ಛಾಯಾಚಿತ್ರ ಸ್ಪರ್ಧೆ ಸಂಚಾಲಕ ವಸಂತ ಕೇದಿಗೆಯವರು ತಿಳಿಸಿದ್ದಾರೆ. ತುಳುನಾಡಿನ ಸಂಸ್ಕೃತಿ, ಕೃಷಿ, ಪ್ರವಾಸೋದ್ಯಮ, ಧಾರ್ಮಿಕ, ಕ್ರೀಡೆ ಮುಂತಾದ ವಿಚಾರಗಳಿಗೆ ಸಂಬಂಧಪಟ್ಟ ಹಾಗೆ ಆನ್ಲೈನ್ ಮೂಲಕ ಫೋಟೋಗಳನ್ನು ಕಳುಹಿಸಿ ಕೊಡಬಹುದಾಗಿದೆ. ದಶಂಬರ ೧೦ರಂದು ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಹಾಗೂ ಛಾಯಾಚಿತ್ರಗಳನ್ನು ಸಹ್ಯಾದ್ರಿ ಆವರಣದಲ್ಲಿ ಪ್ರದರ್ಶಿಸಲಾಗುವುದು.
ದಿನಾಂಕ: 12.12.2014ರ ಸಂಜೆ 7.00 ಗಂಟೆಗೆ ನಮ್ಮ ತುಳುನಾಡು ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಹಿರಿಯ ಪರ್ತ್ರಕರ್ತರಾದ ಎ.ಈಶ್ವರಯ್ಯ ಅವರು ಮಾಡಲಿದ್ದಾರೆ
ಹೆಚ್ಚಿನ ಮಾಹಿತಿಗಾಗಿ : ಈ ವೈಬ್ ಸೈಟ್ ನ್ನು ಲಾಗ್ ಮಾಡಿ -DV pixel12life.in ವಸಂತ ಕೇದಿಗೆ ನಿರ್ವಹಣ ಕಾರ್ಯದರ್ಶಿ ದೂರವಾಣಿ : 9448262204 ಇಮೇಲ್ : vasanth@kedige.com ಇವರನ್ನು ಸಂಪರ್ಕಿಸಬಹುದು ಎಂದು ವಿಶ್ವ ತುಳುವೆರೆ ಪರ್ಬದ ಪ್ರಕಟಣೆ ತಿಳಿಸಿದೆ.